ರೂಪಾಂತರ

ಕಡಲೊಳಗಿನ ಹನಿ ಹನಿ
ಸೂರ್ಯನೊಳಗಿನ ಬೆಳಕ ರೇಖೆಗಳು
ಎಲ್ಲ ಜಂಜಡವ ಹೊತ್ತು ಸಾಗಿದ ಕಾಲ.

ಮನದ ಭಾಷೆದ ಅರಳಿದ ಶಬ್ದ
ಶಬ್ದದೊಳಗಿನ ನಿಶ್ಶಬ್ದ
ಎಲ್ಲ ಮಥಿಸಿದ ಆತ್ಮ ಸಂಗಾತ.

ಕನವರಿಸಿದ ಏಕಾಂತ
ಮೊಳಕೆ ಒಡೆಯುವ ಬೀಜ
ಎಲ್ಲ ಫಸಲೊಡೆದ ಪೈರು.

ಕುಡಿ ಒಡೆದ ಚಿಗುರು
ಸ್ಪರ್ಶಗಳ ಲಯ ಬಾಷೆ
ಎಲ್ಲ ಹೆಮ್ಮರವಾಗುವ ವೃಕ್ಷ.

ಹನಿಗೆ ಚಿಗುರಿದ ಬೇರು
ಘನಕೆ ಅರಳಿದ ಕೊಯ್ಲ
ಎಲ್ಲ ಸುಗ್ಗೀ ಹಿಗ್ಗಿನ ಮ್ಯಾಳ.

ಚಿಗುರಿ ಹುಟ್ಟಿ ಬೆಳೆದು ಸುಳಿದ
ದಿಕ್ಕಿಗೆ ಚಲಿಸಿದ ಗಾಳಿ ಗಂಧ
ಎಲ್ಲ ಬಾಗಿಲು ತೆರೆದು ದಾಟಿ ಹೋದ ಹಕ್ಕಿ.

ಮಥಿಸಿದ ಬೆಳಕು ಚಿಗುರು ಭಾಷೆ
ಅರ್ವಿಭಾವಕೆ ಒಲುಮೆಯ ಹಾಡು
ಜಗದ ನೆಲಮುಗಿಲುಗಳ ಎಲ್ಲ ರೂಪಾಂತರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮದುವೆಯಾಯಿತು ಉಷೆಗೆ
Next post ಅಮೃತ ತರಂಗಿಣಿ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys